ಪೋಸ್ಟ್‌ಗಳು

ನಿಜವಾಯ್ತು ಶಿವಯ್ಯ ಶ್ರೀಗಳ ಹೇಳಿಕೆ

ಇಮೇಜ್
              ಅಚ್ಚಿಕಡಿಯಿಂದ ಇಚ್ಚಿಕಡಿ ಇಚ್ಚಿಕಡಿಯಿಂದ ಅಚ್ಚಿಕಡಿ ಈ ಸಾಲಾ ಇಲೆಕ್ಷನ್ ಮಸ್ತ ಇರ್ತದ ನೀವೆಂದೂ ಇಂತಾ ಇಲೆಕ್ಷನ್ ನೋಡಿರಂಗಿಲ್ಲಾ ಮುಂದು ನೋಡಲ್ಲ ಹಂಗ ಲಟಿಪಿಟಿ ಕಟಿಪಿಟಿ ಐತಿ ಎಂದು ಶಿವಯ್ಯ ಶ್ರೀಗಳು ಹೇಳಿದ ಹೇಳಿಕೆ ಈಗ ಜಿಲ್ಲೆಯ ಜನರ ಬಾಯಲ್ಲಿ ಮತ್ತೆ ಗುನಗುತ್ತಿದೆ. ಅದಕ್ಕೆ ಕಾರಣ ಸದ್ಯದ ರಾಜಕೀಯ ವಾತಾವರಣ.              ವಿಜಯಪುರ ಜಿಲ್ಲೆಯ ಕತಕನಹಳ್ಳಿ ಗ್ರಾಮ ಶ್ರೀ ಗುರು ಚಕ್ರವರ್ತಿ ಸದಾಶಿವ ಸ್ವಾಮಿಗಳ ಮಠದಿಂದ ಹೆಚ್ಚು ಜಾಗೃತ ಮತ್ತು ಭಕ್ತರ ಶೃದ್ದಾಕೇಂದ್ರವಾಗಿದೆ. ಇಲ್ಲಿನ ಪೀಠಾದ್ಯಕ್ಷರಾದ ಪೂಜ್ಯ ಶ್ರೀಶಿವಯ್ಯ ಶ್ರೀಗಳ ಶಿಸ್ತು ಭಕ್ತಿ, ಭಕ್ತರ ಆರೈಕೆ ಹಾರೈಕೆ ಮತ್ತು ಅವರಾಡುವ ಪ್ರತಿ ಮಾತು ಪ್ರಚಲಿತವಾಗುತ್ತಿರುವುದು ಈ ಕ್ಷೇತ್ರದ ಮಹಿಮೆ ಇನ್ನಷ್ಟು ಹೆಚ್ಚಿಸಿದೆ.                ಪ್ರತಿವರ್ಷ ಯುಗಾರಂಭದ ಯುಗಾದಿಯ ಶುಭದಿನ ನಡೆಯುವ ಜಾತ್ರೆಕೂಡ ಬಹಳ ವೈಶಿಷ್ಟ್ಯ ಹೊಂದಿರುತ್ತದೆ.  ಅಂದು ಶಿವಯ್ಯ ಶ್ರೀಗಳು ಹೇಳುವ ಗುರುವಿನ ಅಂತಃಕರಣದ ನುಡಿಗಳು ಹೆಚ್ಚು ಮಹತ್ವ ಪಡೆಯುತ್ತವೆ. ಜಿಲ್ಲೆಯ ತುಂಬ ಅದರ ವಿಶ್ಲೆಷಣೆ ನಡೆಯುತ್ತದೆ.                 ಕತಕನಹಳ್ಳಿ ಗ್ರಾಮ ದೇವತೆ ಲಗಮವ್ವ ದೇವಿ ದೇವಸ್ಥಾನದ ಕಟ್ಟೆಯಲ್ಲಿ ರಂಗೋಲಿ ಬಿಡಿಸಿದ ಕಂಬಳಿಯ ಮೇಲೆ ನಿಂತು ಗುರುವಿನ ಅಂತಃಕರಣ ನುಡಿಗಳನ್ನು ನುಡಿಯುತ್ತಾರೆ. ಅದಕ್ಕೆ ಕಾಲಜ್ಞಾನ ಮತ್ತು ಕಾರಣಿಕ ನುಡಿಗಳೆಂದು ಕರೆಯುತ್ತಾರೆ. ಪ್ರತಿ ಯುಗಾದಿಯಂದು ಆ ವ

ರೈತರ ಸೀತನಿ ಪಾರ್ಟಿ

ಇಮೇಜ್
         ಚಳಿಯ ನಡುವೆ ಹೋಲದಲ್ಲಿ  ಎಳೆಯ ಜೋಳದ ಕಾಳುಗಳನ್ನು  ಹುರಿದು ಬಿಸಿ ಮಾಡಿ ತಿನ್ನುವುದರ ಮಜವೇ ಬೇರೆ. ಬೇಕೆಂದಾಗಲೆಲ್ಲ ಸಿಗುವ ಭಾಗ್ಯ ಮತ್ತು ಮಜ ಇದಲ್ಲ ಪ್ರಕೃತಿ ಕೊಟ್ಟಾಗ ಮಾನವರಾದ ನಾವು ಪ್ರಕೃತಿಗೆ ಕೃತಜ್ಞರಾಗಿ ಅನುಭವಿಸಿ ಸವಿಯಬೇಕಷ್ಟೆ.              ಸಂಕ್ರಾಂತಿ ಹಬ್ಬದ ವೇಳೆಗೆ ನಮ್ಮ ರೈತರು ಫಸಲಿನ ‌ಸಂಭ್ರಮದಲ್ಲಿರುತ್ತಾರೆ. ಈ ವೇಳೆಗಾಗಲೇ ಬೆಳೆದ ಬೆಳೆ ಬೇಳೆದು ನಿಂತು ರಾಶಿ ಮಾಡಿ ಗಂಟು ಕಟ್ಟವ ಸಮಯ. ಬೆಳೆ ಮತ್ತು ಪ್ರಕೃತಿ ನಡುವಿನ ಸಂಬಂಧ ರೈತರಿಗಷ್ಟೆ ಗೊತ್ತು ವರ್ತಮಾನಕ್ಕೆ ತಕ್ಕಂತೆ ಬೆಳೆ ಬೆಳೆದು ಫಸಲುಂಡು ಖುಷಿಯಾಗುತ್ತಾರೆ. ಬೆಳೆ ಬೆಳೆದು ರಾಶಿ ಮಾಡುವುದಷ್ಟೆ ಅಲ್ಲ ಅದನ್ನು ಆರಾಧಿಸುವುದು ಕೂಡ ಆತನ ಕರ್ತವ್ಯ ಎಂದು ನಂಬುತ್ತಾನೆ. ಈ ನಂಬುಗೆಗೆ ಪ್ರಕೃತಿ ದೇವಿ ಆತನ ಕೈ ಹಿಡಿಯುತ್ತಾಳೆ.      ರಾಶಿ ಮಾಡುವ ಮುನ್ನ ಬೆಳೆಯನ್ನು ಗಮನಿಸಿ ಎಳೆಯ ಕಾಳಗಳನ್ನು ಹುರಿದು ತಮ್ಮ ಪರಿವಾರದೊಂದಿಗೆ ಸಣ್ಣದೊಂದು ಪಾರ್ಟಿಕೂಡಾ ರೈತ ಮಾಡುತ್ತಾನೆ. ಇದಕ್ಕೆ ಗ್ರಾಮೀಣ ಭಾಷೆಯಲ್ಲಿ ಸೀತನಿ ಎನ್ನುತ್ತಾರೆ. ಈ ಎಳೆಯ ಕಾಳುಗಳ  ಮಹತ್ವ ಗೊತ್ತಾದರೆ ನೀವು ಈ ಬೆಳೆಗೆ ಬೆಲೆ ಕಟ್ಟಿ ಕೊಂಡುಕೊಳ್ಳಲು ಸಾಲುಗಟ್ಟಿ ನಿಲ್ಲುತ್ತೀರಿ!!! ಅಷ್ಟು ಪೌಷ್ಠಿಕಾಂಶದ ಆಹಾರ ಈ ಸೀತನಿ ಸಿಗುವುದು ಪ್ರಕೃತಿದತ್ತ ಕೊಡುಗೆ.    ‌‌      ಸಾಮಾನ್ಯವಾಗಿ ಈ ರೈತರ ಪಾರ್ಟಿ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಕಾಣಸಿಗುತ್ತವೆ. ರೈತ

ಶತಮಾನ ಸಂಭ್ರಮಕ್ಕೆ ಸಜ್ಜಾದ ಸಿದ್ದೇಶ್ವರ ಜಾತ್ರೆ

ಇಮೇಜ್
ಒಬ್ಬರ ಮನವ ನೋಯಿಸಿ, ಒಬ್ಬರ ಮನವ ಘಾತವ ಮಾಡಿ, ಗಂಗೆಯ ಮುಳುಗಿದಡೇನಾಗುವುದಯ್ಯ? ಚಂದ್ರನು ಗಂಗೆಯ ತಡದಲ್ಲಿದ್ದಡೇನಾಗುವುದಯ್ಯ? ಕಳಂಕ ಬಿಡದಾಯಿತ್ತಯ್ಯ ಅದು ಕಾರಣ, ಮನವ ನೋಯಿಸದವನೆ, ಒಬ್ಬರ ಘಾತವ ಮಾಡದವನೆ, ಪರಮಪಾವನ ನೋಡಾ, ಕಪಿಲಸಿದ್ದಮಲ್ಲಿಕಾರ್ಜುನಾ.                ‌          12ನೇ ಶತಮಾನದಲ್ಲಿ ಹಲವಾರು ಶರಣರು ಮನುಜ ಕುಲದ ಅಭ್ಯುದಯಕ್ಕಾಗಿ, ಈ ಧರೆಯ ಏಳಿಗೆಗಾಗಿ  ಶ್ರಮಿಸಿದ್ದಾರೆ. ತಮ್ಮ ಅತ್ಯಮುಲ್ಯ ವಚನ ಸಾಹಿತ್ಯದ ಮೂಲಕ ಸಮಾನತೆ, ಸಾಮಾಜಿಕ ಕಾಳಜಿ ಕಾಯಕ ತತ್ವ ದಾಸೋಹ ಆದರಿಸಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಇವರ ಸಾಲಲ್ಲಿ ಕರ್ಮಯೋಗಿ ಸಿದ್ದರಾಮರೂ ಕೂಡ ಒಬ್ಬರು. ಆರಾದ್ಯದೈವ ಶ್ರೀ ಕಪಿಲ ಸಿದ್ದಮಲ್ಲಿಕಾರ್ಜುನನ ಅಂಕಿತನಾಮದಿಂದ ಸಹಸ್ರ ವಚನಗಳನ್ನು ರಚಿಸಿದ್ದಾರೆ.     ‌‌‌        ಈಗಿನ ಮಹಾರಾಷ್ಟ್ರದ ಸೊಲ್ಹಾಪುರ ಆಗಿನ ಸೊನ್ನಲಗಿಯಲ್ಲಿ ಮುದ್ದಗೌಡ ಮತ್ತು ಸುಗ್ಗಲಾದೇವಿ ಪುತ್ರನಾಗಿ ಕ್ರಿ.ಶ 1165ರಲ್ಲಿ ಜನಿಸಿದರು.          ‌‌ ಶಿವತತ್ವ ಪ್ರಾಚಾರಕ್ಕಾಗಿ ಸಿದ್ದಾನಾಗಿ ಬಂದಿದ್ದ ಸಿದ್ದೇಶ್ವರ ಬಾಲ್ಯದಲ್ಲಿ ವಿಶಿಷ್ಠ ಶಾಂತ ಸ್ವಭಾವದವನಾಗಿದ್ದ ಎಲ್ಲರಂತೆ ಎಲ್ಲರೊಡನೆ ಬೆರೆಯುವ ಗುಣ ಇರಲಿಲ್ಲ ಹಾಗಾಗಿ ಇವನನ್ನು ಬುದ್ದಿಮಾಂದ್ಯ ಎಂದೂ ಕರೆಯುತ್ತಾರೆ. ಮಗನ‌ ಈ ಪರಿಸ್ಥಿತಿ ಅರಿತು ಪರಿಸರದೊಂದಿಗೆ ಬೆರೆಯಲು ದನ ಕಾಯಲು ಕಳುಹಿಸುತ್ತಾನೆ. ಪ್ರತಿದಿನ ದನಕಾಯುವುದು ಸಿದ್ದರಾಮನ ಕಾಯಕವಾಯಿತು. ದನಗಳನ್ನು ಮೇಯ

ಗುಡ್ಡಾಪುರ ಶ್ರೀ ದಾನಮ್ಮ ದೇವಿ

ಇಮೇಜ್
ವಿಶ್ವದಲ್ಲಿ ಶಾಂತಿ ಅಶಾಂತಿಗಳ ಧರ್ಮ ಅಧರ್ಮ ಸಂಘರ್ಷ ನಡೆದಾಗ ಸುಳ್ಳು ಸತ್ಯದ ಮೇಲೆ ಮೆರೆದಾಡುತ್ತಿರುವಾಗ ಮನುಕುಲದ ಉದ್ದಾರಕ್ಕಾಗಿ ಧರೆಗೆ ಅವತರಿಸಿ ಸಾದಾರಣ ಜೀವನದಲ್ಲಿ ಸುದಾರಣೆ ತಂದು ನಾಡಿನ ಜನರ ಅಜ್ಞಾನ ಅಳಿಸಿ ಸುಜ್ಞಾನ ತೋರಿದ ಮಹಾನ್ ಶರಣ ಸಂತ ಮಹಾ ತಪಸ್ವಿಗಳ ನಾಡು ನಮ್ಮದು. ಇವರ ಸಾಲಿನಲ್ಲಿ ಬರುವ 12 ನೇ ಶತಮಾನದ ಶ್ರೀ ದಾನಮ್ಮದೇವಿ ತಮ್ಮ ದಾನ ಧರ್ಮ ದಿಂದ  ಕೋಟ್ಯಂತರ ಜನರ ಅಮ್ಮನಾಗಿ ಗುಡ್ಡಾಪುರದಲ್ಲಿ ನೆಲೆಸಿದ್ದಾರೆ.        ಮಹಾರಾಷ್ಟ್ರದ ಜತ್ತ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಪಂಚಾಳ ಮನೆತನದ ಶ್ರೀ ವೀರಭದ್ರನ ಪರಮ ಭಕ್ತರಾದ ಅನಂತರಾಯ ಮತ್ತು ಶಿರಸಮ್ಮ ದಂಪತಿಗೆ ಬಹಾಲ ವರ್ಷ ಕಳೆದರೂ ಮಕ್ಕಳಿಲ್ಲ ಎಂಬ ಕೊರಗೂ ಇರುತ್ತದೆ. ದಂಪತಿಗಳು ವೀರಭದ್ರನನ್ನು ಬೆಡಿಕೊಳ್ಳಲಾಗಿ ಸ್ವಪ್ನದಲ್ಲಿ ಬಂದು ಆಶೀರ್ವಾದ ಮಾಡಿದ ನವಮಾಸ ಕಳೆದ ನಂತರ ಶಿರಸಮ್ಮ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಮಗುವಿನಲ್ಲಿನ ಅಮೋಘ ಪ್ರಜ್ವಲತೆ ಎಲ್ಲರ ಸಂತೋಷಕ್ಕೆ ಕಾರಣವಾಗುತ್ತದೆ.   ಮಗು ಹಾಲು ಕುಡಿಯದಾದಾಗ ಒಂದು ಚಿಂತೆ ಶುರುವಾಗಿ ಬಿಡುತ್ತದೆ. ಜಂಗಮರ ಆದೇಶದಂತೆ ಜನನದಿಂದ ಹದಿಮೂರನೇ ದಿನಕ್ಕೆ ಮಂಗಲ ಗೀತೆ ಹಾಡುತ್ತ ಲಿಂಗದಾರಣೆ ಮಾಡುತ್ತಿದ್ದಂತೆ ಹಾಲು ಕುಡಿಯಲು ಪ್ರಾರಂಭಿಸುತ್ತದೆ. ಎಲ್ಲರೂ ಸೇರಿ ಮಗುವಿಗೆ ಲಿಂಗಮ್ಮ ಎಂದು ನಾಮಕರಣ ಮಾಡುತ್ತಾರೆ. ತಂದೆ    ತಾಯಿಯರ ಲಿಂಗಪೂಜೆ ಶಿವಶರಣರ ಕಥೆ ಕೇಳಿ ಪ್ರೇತಿತಲಾದ ಲಿಂಗಮ್ಮ ಕಲ್ಯಾಣದಲ್ಲಿರ

ವೇದಾಂತ ಕೇಸರಿ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ

ಇಮೇಜ್
ಚಿತ್ರ: ಮಲ್ಲಿಕಾರ್ಜುನ  ಸ್ವಾಮೀಜಿ ಚಿತ್ರ : ಜ್ಞಾನಯೋಗಾಶ್ರಮದ ಪ್ರಣವಮಂಟಪ ಪ್ರವಚನ ಮೂಲಕ ಜನರನ್ನು ಪರಿವರ್ತಿಸಿದ ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ 🙏🙏    ಅಜ್ಞಾನ ಅಳಿಸಿ ಸುಜ್ಞಾನದೆಡೆಗೆ ಕೊಂಡೊಯ್ಯುವ ಗುರುಗಳನ್ನು ನೆನೆಯುವ ಪರ್ವದಿನವೇ ಗುರುಪೌರ್ಣಿಮೆ. ಇದು ಎಲ್ಲ ಧರ್ಮದವರಿಗೂ ಪವಿತ್ರ.  ಅಂತೆಯೇ ಪ್ರವಚನಗಳ ಮೂಲಕ ಭಕ್ತರ ಅಂಧಕಾರ ನೀಗಿಸಿ ಸುಜ್ಞಾನದೆಡೆಗೆ ದಾರಿ ತೋರಿದ ವಿಜಯಪುರ ಜ್ಞಾನಯೋಗಾಶ್ರಮದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು  ಗುರುಪೌರ್ಣಿಮೆಯಂದು ಆರಾಧಿಸಲಾಗುತ್ತಿದೆ.  ⛳ಮನುಕುಲದ ಉದ್ಧಾರಕ:- ಯುಗಪುರುಷ ಶ್ರೀ ಮಲ್ಲಿಕಾರ್ಜುನ ಶ್ರೀಗಳ ಬಾಲ್ಯದ ಹೆಸರು ಮುದುಕಪ್ಪ. ಇವರು 1903 ಅಗಸ್ಟ 15ರಂದು ಸವದತ್ತಿ ತಾಲೂಕಿನ ಹಂಚಿನಾಳದ ಚನ್ನವೀರಪ್ಪ ಮತ್ತು ನೀಲಮ್ಮ ದಂಪತಿಯ ಪವಿತ್ರ ಗರ್ಭದಲ್ಲಿ ಜನಿಸಿದರು. ತಾಯಿಯಿಂದ ಅಕ್ಷರಾಭ್ಯಾಸ ಮಾಡಿದ ಮುದುಕಪ್ಪ ಉತ್ತಮ ಕಂಠಸಿರಿ ಹೊಂದಿದ್ದರು. ಭಕ್ತಪ್ರಲ್ಹಾದ, ಶ್ರವಣಕುಮಾರ ಮತ್ತು ಅನೇಕ ಭಕ್ತಿ ಪ್ರಧಾನ ನಾಟಕಗಳಲ್ಲಿ ಭಾಗವಹಿಸಿ ಜನರ ಮೆಚ್ಚುಗೆ ಗಳಿಸಿದ್ದರು.       ಇವರ ಕಂಚಿನ ಕಂಠಕ್ಕೆ ತಲೆದೂಗಿದ ಗದುಗಿನ ಶಿವಾನಂದರು ತಮ್ಮ ಜ್ಞಾನ ಪ್ರಸಾರ ಕಾರ್ಯಕ್ಕೆ ಸೇರಿಸಿಕೊಂಡರು. ಮುದುಕಪ್ಪನಿಗೆ 1924ರಲ್ಲಿ ದೀಕ್ಷೆ ನೀಡಿದರು. ಬಳಿಕ ಮಲ್ಲಿಕಾರ್ಜುನ ಸ್ವಾಮಿಗಳು ಮೀರಜನ  ಕಲ್ಲಪ್ಪ ಜಕಾತೆ ಅವರ ಮನೆಯಲ್ಲಿ ನಿಜಗುಣ ಶಾಸ್ತ್ರ ಪ್ರವ

ವಚನ ಪಿತಾಮಹ ರಾವ್ ಬಹದ್ದೂರ್ ಡಾ|| ಫಕೀರಪ್ಪ ಗುರಬಸಪ್ಪ ಹಳಕಟ್ಟಿ

ಇಮೇಜ್
                 ಕೆರೆಯನ್ನು ಕಟ್ಟಿಸಿ, ಸಂಘ ಸಂಸ್ಥೆಗಳನ್ನು ಸ್ಥಾಪಿಸಿ, ಶಾಲೆ ಕಾಲೇಜು ತೆರೆಸಿ, ಜನರ ಉದ್ದಾರಗೈದ ಮಹಾಪುರುಷ ಶ್ರೀ ಫ ಗು ಹಳಕಟ್ಟಿಯವರು, ಹಾಳಾಗುತ್ತಿದ್ದ ೧೨ನೇ ಶತಮಾನದ ಬಸವಾದಿ ಶರಣರ ವಚನಗಳ ತಾಳೆಗರಿಗಳನ್ನು ಸಂಗ್ರಹಿಸಿ ರಕ್ಷಿಸಿದ ಶರಣ ಸರಳ ಜೀವಿ ಅಧುನಿಕ ವಿಜಯಪುರದ ನಿರ್ಮಾತೃ. ಪ್ರತಿವರ್ಷ ಜುಲೈ ೨ ರಂದು ಹಳಕಟ್ಟಿಯವರ ಜನ್ಮ ದಿನಾಚರಣೆಯನ್ನು ವಿಜಯಪುರದಲ್ಲಿ ವಿವಿಧ ಸಂಘ ಸಂಸ್ಥೆಗಳು ಆಚರಿಸುತ್ತ ಬಂದಿವೆ.           ಕನ್ನಡದ ಕಣ್ವ ಬಿಎಂಶ್ರೀ ವಿಜಯಪುರಕ್ಕೆ ಬಂದಾಗ ಸ್ಥಳೀಯ ಸಾಹಿತಿಯೊಬ್ಬರು ಗೋಳಗುಮ್ಮಟ ನೋಡಲು ಕರೆದುಕೊಂಡು ಹೋರಟರು. ಆದರೆ ಬಿಎಂಶ್ರೀ ಮೊದಲು ನನ್ನನ್ನು ವಚನ ಗುಮ್ಮಟಕ್ಕೆ ಕರೆದೊಯ್ಯಿರಿ ಎಂದರು. ಜುಲೈ 2 ವಚನಗುಮ್ಮಟ ವಚನ ಪಿತಾಮಹ ರಾವ್ ಬಹದ್ದೂರ ಡಾ|| ಫ.ಗು.ಹಳಕಟ್ಟಿ ಯವರ 139ನೇ ಜನ್ಮದಿನ.        ಫಕೀರಪ್ಪ ಗುರಬಸಪ್ಪ ಹಳಕಟ್ಟಿಯವರು ಶರಣ ದಂಪತಿಗಾಳಾದ ದಾನಮ್ಮ ಮತ್ತು ಗುರಬಸಪ್ಪನವರ ಮಗನಾಗಿ 1880 ರ ಜುಲೈ 2 ರಂದು ಜನಿಸಿದರು. ‌ತಂದೆ ಗುರಬಸಪ್ಪ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಫಕೀರಪ್ಪ ತನ್ನ ಬಾಲ್ಯವನ್ನು ಮುಗಿಸಿ ಮೆಟ್ರಿಕ್ ಶಿಕ್ಷಣವನ್ನು 1896ರಲ್ಲಿ ಮುಗಿಸಿ ಮುಂಬೈ ಸೇಂಟ್ ಝೇವಿಯರ್ ಕಾಲೇಜ ಸೇರಿ 1901ರಲ್ಲಿ ಬಿಎಸ್.ಸಿ ಪಾಸಾಗಿ 1904 ರಲ್ಲಿ ಎಲ್ ಎಲ್ ಬಿ ಪದವಿ ಪಡೆಯುತ್ತಾರೆ.       ಬೆಳಗಾವಿಯಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿ ಮುಂದೆ ವಿಜಯಪುರವನ

ಇಂಜಿನೀಯರಿಂಗ್ ಕಾಲೇಜ್ ಕ್ಯಾಂಪಸ್ ನಲ್ಲಿ ಕಲಾಶ್ರೀಮಂತಿಕೆ ಕಲರವ

ಇಮೇಜ್
ಕ್ಯಾಂಪಸ್ ತುಂಬ ದೋತಿ, ರುಮಾಲು, ಪಂಚೆ, ಪೇಟ ಧರಿಸಿದ ಹುಡುಗರು. ಬಣ್ಣ ಬಣ್ಣದ ಸೀರೆ ತೊಟ್ಟು ಚಿತ್ತಾರ ಬಿಡಿಸಿದ ಹುಡುಗಿಯರು. ಒಂದೆಡೆ ತಂತ್ರಜ್ಞಾನಕ್ಕೆ ಸಂಬಂದಿಸಿದ ಆಟಗಳು ನಡೆದರೆ ಮತ್ತೊಂದೆಡೆ ವರ್ಣಚಿತ್ರಗಳು, ಕಲಾಕೃತಿಗಳು ಮತ್ತು ಹಳ್ಳಿ ಸೊಗಡಿನ ವೈಭವ ಅನಾವರಣ ಗೊಂಡಿತ್ತು ಇದು ವಿಜಯಪುರ ಬಿ ಎಲ್ ಡಿ ಇ ಸಂಸ್ಥೆಯ ಡಾ|| ಫ.ಗು. ಹಳಕಟ್ಟಿ ಅಭಿಯಂತರರ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನ ನಡೆದ ಇನ್ವಿಕ್ಟಸ್2017 ರ ಚಿತ್ರಣ.            ಕಾಲೇಜಿನ ಸಿವಿಲ್ ಇಂಜಿನೀಯರಿಂಗ್ ವಿಭಾಗದಿಂದ ಆಯೋಜಿಸಲಾಗಿದ್ದ "ಕಲಾ ಕಾರ್ನರ್" ಎಲ್ಲರ ಗಮನ ಸೆಳೆಯುತ್ತಿತ್ತು. ಮೇವು ತುಂಬಿದ ಎತ್ತಿನ‌ಬಂಡಿ ಮತ್ತು ಸೈಕಲ್ ಪ್ರವೇಶ ದ್ವಾರದಲ್ಲೆ ನೋಡುಗರನ್ನು ಸ್ವಾಗತಿಸುತ್ತಿದ್ದವು. ಕಲಾ ಕಾರ್ನರ್ ಆಯೋಜಕರು ಮಣ್ಣಿನ‌ ಮಕ್ಕಳಂತೆ ದೊತಿ ರುಮಾಲು, ಇಲಕಲ್ ಸೀರೆ ತೊಟ್ಟು ಪ್ರೇಕ್ಷರಿಗೆ ಕಲಾಕೃತಿಗಳ ಮಾಹಿತಿ ನೀಡುತ್ತಿದ್ದರು.              ಕಲಾ ಕಾರ್ನರ್ ನಲ್ಲಿ ಪ್ರದರ್ಶಿಸಕ್ಕಿಡಲಾದ ಚಿತ್ರಗಳು ಜಾತ್ರೆ  ದೇವಸ್ಥಾನ ರೈತರು ಜಾನುವಾರು ಮಹಿಳೆಯರು ಮತ್ತು ಬುದ್ದ ಮಹಾವೀರರಂಥ ಮಹಾನ್ ವ್ಯಕ್ತಿಗಳ ತೈಲ‌ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಮೊಮ್ಮಗನ‌‌ ಮೇಲಿನ‌ ಅಜ್ಜನ ‌ಮಮಕಾರ, ರೈತ ಜಾನುವಾರುಗಳ ನಡುವಿನ ಸಂಬಂಧ, ಪಾರಿವಾಳದಿಂದ ಇಂದಿನ ಮೊಬೈಲ್ ವರೆಗಿನ ಸಂಪರ್ಕ ಮಾದ್ಯಮಗಳು, ಅಂತರಂಗ ಶುದ್ದಿಯ ಉತ್ತಮ ಸಂದೇಶ ಸಾರುವ ಸುಮಾರು 70ಕ್