ಪೋಸ್ಟ್‌ಗಳು

ಡಿಸೆಂಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶರಣ ಭಾವ, ಸರಳ ಜೀವ ಶ್ರೀ ಬಿ ಎಂ‌ ಪಾಟೀಲ

ಇಮೇಜ್
ಹಲವು ವೈವಿದ್ಯಗಳ ಬೀಡು ವಿಜಯಪುರ ತಾಲೂಕು ೫ ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿದೆ. ಈ ಬಾರಿಯ ಸಮ್ಮೇಳನ ಸುಕ್ಷೇತ್ರ ಕತಕನಹಳ್ಳಿಯಲ್ಲಿ ನಡೆಸಲು ಸಕಲ‌ಸಿದ್ದತೆಗಳು ಭರದಿಂದ ಸಾಗಿದೆ. ರಾಷ್ಟ್ರ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಹಾಗೂ ಕ್ರೀಯಾಶೀಲ ಸಾಹಿತಿ ಶ್ರೀ ಬಿ ಎಂ ಪಾಟೀಲ ಅವರನ್ನು ಸರ್ವಾದ್ಯಕ್ಷರಾನ್ನಾಗಿ ಆಯ್ಕೆ ಮಾಡಲಾಗಿದೆ.          ಮನಗೂಳಿಯ ಶ್ರೀ ಬಿ ಎಂ ಪಾಟೀಲರು ವೃತ್ತಿಯಲ್ಲಿ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿ ಮಾಡಿದ ತಪಸ್ಸು ಬಹಳಷ್ಟು. ಹಲವಾರು ರಚನಾತ್ಮಕ ಚಟುವಟಿಕೆಗಳ ಮೂಲಕ ಜನರ ಮೆಚ್ಚುಗೆ ಗಳಿಸಿದ್ದಾರೆ. ಸಾಹಿತ್ಯೀಕವಾಗಿ ಧಾರ್ಮಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹಲವಾರು ಆಯಾಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಕರಾಗಿ 33ವರ್ಷ ಸೇವೆ  ಗ್ರಾಮೀಣ ಬದುಕನ್ನು ಹೆಚ್ಚು ಪ್ರೀತಿಸುವ ಇವರು ತಮ್ಮ ವೃತ್ತಿ ಜೀವನದಲ್ಲಿ ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಜಾಗೃತಗೊಳಿಸಲು ಮೊಗ್ಗು, ಬೆಳಕು, ಸಂಪಿಗೆ, ಮಲ್ಲಿಗೆ, ಸೌರಭ, ಸಿರಿಗನ್ನಡ ಸೇರಿದಂತೆ ಹಲವಾರು ಹಸ್ತಪ್ರತಿಗಳನ್ನು ಸಿದ್ದಪಡಿಸಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಆಯಾಮ ಬರೆದಿದ್ದಾರೆ. ಇದರಿಂದ ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳ ಆಸಕ್ತಿ ತುಂಬಿದ್ದಾರೆ. ಕೃತಿಗಳು ಮಕ್ಕಳ ನಾಟಕ, ಸಾಮಾಜಿಕ ನಾಟಕ, ಕವಮ ಸಂಕಲನ, ಕಥೆ ಮತ್ತು ಹಲವಾರು ಲೇಖನಗಳನ್ನು ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಕ