ಮನೆ ಮನೆಗೆ ಕಂಬಿ ಮಲ್ಲಯ್ಯನ ದರ್ಶನ
ಶಿವ ಶಿವೋ ಹಾಲ ಮಲ್ಲಯ್ಯ ಓಲಮಲ್ಲಯ್ಯ ಸಕ್ಕರಿ ಸವಿಗಾರ ಮಲ್ಲಯ್ಯ ಮಹಾಂತ ಮಲ್ಲಯ್ಯ ಉಘೇ ಹಾಲಗಿರಿ ಮೇಲಗಿರಿ ಸಿದ್ದಗಿರಿ ಸಿಂಹಾಸನಗಿರಿ ಶ್ರೀ ಪಾದಕೆ ಮಹಾಂತ ಮಲ್ಲಯ್ಯ ಉಘೇ ಪಾತಾಳಗಂಗೆ ಜ್ಯೋತಿರ್ಲಿಂಗ ಶ್ರೀ ಪಾದಕೆ ಮಹಾಂತ ಮಲ್ಲಯ್ಯ ಉಘೇ ಬಂಗಾರ ಗುಡಿ ಬೋಳಮಲ್ಲಿಕಾರ್ಜುನ ಶ್ರೀ ಮಹಾಂತ ಮಲ್ಲಯ್ಯ ಉಘೇ ಹೀಗೆ ಶ್ರೀಶೈಲ ಮಲ್ಲಿಕಾರ್ಜುನನ್ನು ನೆನೆಯುತ್ತ ಬೆಟ್ಟದ ಕಲ್ಲು ಮುಳ್ಳುಗಳ ಹಾದಿಯಲ್ಲಿ ಭಕ್ತರು ಹೆಜ್ಜೆಹಾಕುತ್ತಾರೆ. ಯುಗಾದಿ ಹಬ್ಬದಂದು ನಡೆಯುವ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲ ಕ್ಷೇತ್ರದಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ. ಇದೀಗ ಕಂಬಿ ಮಲ್ಲಯ್ಯ ಊರಿನ ಎಲ್ಲೆಡೆ ಮನೆ ಮನೆಗೆ ತೆರಳಿ ದರ್ಶನ ನೀಡುತ್ತಿದ್ದಾನೆ. ಕಂಬಿ ಒಂದು ಬಿದಿರಿನ ಸಾದನ ಅದಕ್ಕೆ ಮುಂಬದಿ ನಂದಿ ಮತ್ತು ಶಿವಲಿಂಗವನ್ನು ಇರಿಸಿ ಹೊದಿಕೆ ಹೊದಿಸಿ ಪೂಜ್ಯಭಾವದಿಂದ ವಿಶೇಷ ವಿನ್ಯಾಸ ಹೊಂದಿರುತ್ತದೆ. ಭಕ್ತರು ಈ ಕಂಬಿಯನ್ನು ಮಲ್ಲಯ್ಯ ಎಂದು ತಮ್ಮೊಡನೆ ಶ್ರೀಶೈಲದ ಹಾದಿಯುದ್ದಕ್ಕೂ ಒಯ್ಯುತ್ತಾರೆ . ಕಂಬಿ ಪದಗಳನ್ನು ಹಾಡುತ್ತಾ ಶಿವಬಜನೆ ಮಾಡುತ್ತಾ ಶ್ರೀಶೈಲ ತಲುಪುತ್ತಾರೆ. ಹಿರಿಯರು ಹೇಳುವ ಪ್ರಕಾರ ಕಂಬಿ ಒಂದು ಬಿರಿರಿನಿಂದ ಮಾಡಿದ ಸಾದನ, ಶ್ರೀಶೈಲದತ್ತ ಪಯಣ ಬೇಳೆಸುವಾಗ ಬಿದಿರಿನ ಒಂದು ಭಾಗಕ್ಕೆ ಆಕಾರದ ಜೋಳಿಗೆ, ಮತ್ತೊಂದು ಬದಿಗೆ ನೀರನ್ನು ಹಾಕಿ ಒಯ್ಯುತ್ತಿದ್ದರು. ಪ್ರಯಾಣಿಕರಿಗೆ ಇದು ಅತೀ ಉಪಯುಕ್ತ ಮತ್ತು ಅನೂಕೂಲಕರವಾದ್ದರಿಂದ ಅದ