ವೇದಾಂತ ಕೇಸರಿ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ
ಚಿತ್ರ: ಮಲ್ಲಿಕಾರ್ಜುನ ಸ್ವಾಮೀಜಿ ಚಿತ್ರ : ಜ್ಞಾನಯೋಗಾಶ್ರಮದ ಪ್ರಣವಮಂಟಪ ಪ್ರವಚನ ಮೂಲಕ ಜನರನ್ನು ಪರಿವರ್ತಿಸಿದ ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ 🙏🙏 ಅಜ್ಞಾನ ಅಳಿಸಿ ಸುಜ್ಞಾನದೆಡೆಗೆ ಕೊಂಡೊಯ್ಯುವ ಗುರುಗಳನ್ನು ನೆನೆಯುವ ಪರ್ವದಿನವೇ ಗುರುಪೌರ್ಣಿಮೆ. ಇದು ಎಲ್ಲ ಧರ್ಮದವರಿಗೂ ಪವಿತ್ರ. ಅಂತೆಯೇ ಪ್ರವಚನಗಳ ಮೂಲಕ ಭಕ್ತರ ಅಂಧಕಾರ ನೀಗಿಸಿ ಸುಜ್ಞಾನದೆಡೆಗೆ ದಾರಿ ತೋರಿದ ವಿಜಯಪುರ ಜ್ಞಾನಯೋಗಾಶ್ರಮದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು ಗುರುಪೌರ್ಣಿಮೆಯಂದು ಆರಾಧಿಸಲಾಗುತ್ತಿದೆ. ⛳ಮನುಕುಲದ ಉದ್ಧಾರಕ:- ಯುಗಪುರುಷ ಶ್ರೀ ಮಲ್ಲಿಕಾರ್ಜುನ ಶ್ರೀಗಳ ಬಾಲ್ಯದ ಹೆಸರು ಮುದುಕಪ್ಪ. ಇವರು 1903 ಅಗಸ್ಟ 15ರಂದು ಸವದತ್ತಿ ತಾಲೂಕಿನ ಹಂಚಿನಾಳದ ಚನ್ನವೀರಪ್ಪ ಮತ್ತು ನೀಲಮ್ಮ ದಂಪತಿಯ ಪವಿತ್ರ ಗರ್ಭದಲ್ಲಿ ಜನಿಸಿದರು. ತಾಯಿಯಿಂದ ಅಕ್ಷರಾಭ್ಯಾಸ ಮಾಡಿದ ಮುದುಕಪ್ಪ ಉತ್ತಮ ಕಂಠಸಿರಿ ಹೊಂದಿದ್ದರು. ಭಕ್ತಪ್ರಲ್ಹಾದ, ಶ್ರವಣಕುಮಾರ ಮತ್ತು ಅನೇಕ ಭಕ್ತಿ ಪ್ರಧಾನ ನಾಟಕಗಳಲ್ಲಿ ಭಾಗವಹಿಸಿ ಜನರ ಮೆಚ್ಚುಗೆ ಗಳಿಸಿದ್ದರು. ಇವರ ಕಂಚಿನ ಕಂಠಕ್ಕೆ ತಲೆದೂಗಿದ ಗದುಗಿನ ಶಿವಾನಂದರು ತಮ್ಮ ಜ್ಞಾನ ಪ್ರಸಾರ ಕಾರ್ಯಕ್ಕೆ ಸೇರಿಸಿಕೊಂಡರು. ಮುದುಕಪ್ಪನಿಗೆ 1924ರಲ್ಲಿ ದೀಕ್ಷೆ ನೀಡಿದರು. ಬಳಿಕ ಮಲ್ಲಿಕಾರ್ಜುನ ಸ್ವಾಮಿಗಳು ಮೀರಜನ ಕಲ್ಲಪ್ಪ ಜಕಾತೆ ಅವರ ಮನೆಯಲ್ಲಿ ನಿಜಗುಣ ಶಾಸ್ತ್ರ ಪ್ರವ